ಶುದ್ದವಾಗಬೇಕು
ಒಳಗಿನಿಂದ
ಗಟ್ಟಿಯಾಗಬೇಕು
ಅಣು ಅಣುವಿನಿಂದ
ದ್ವೇಷ ತ್ಯಜಿಸಬೇಕು
ಮನದಿಂದ
ಸಾಮಾನ್ಯನಾಗಬೇಕು,
ಬೀದಿ ನಾಯಿಯಂತೆ,
ಮತ್ತೆ ಬೆಳೆಯಬೇಕು
ತೆಂಗಿನ ಮರದಂತೆ
ಸುತ್ತ ಸಾವಿರಗರಿ ಚಾಚಿ
ಈ ವ್ಯಂಗ್ಯನುಡಿ
ಚುಚ್ಚು ಮಾತುಗಳ
ಸಿಡಿಲಿಗಂಜದೆ, ಕಾಲದೆಲ್ಲೆ ಮೀರಿ
ಸೂರ್ಯನಂತೆ ಬೆಳಕಾಗಿ!
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
No comments:
Post a Comment