ಬಡತನದ ಮೇಲೆ ಭಾಷಣ ಬಿಗಿಯುತ್ತಾರಂತೆ,
ವಿದೇಶಿ ಮದ್ಯ ಹೀರುತ್ತಾ ಅಭಿಪ್ರಾಯ ವ್ಯಕ್ತ ಪಡಿಸುತ್ತಾರಂತೆ
ವರದಿಗಾರರು ಸಂಪಾದಿಸುತ್ತಾರೆ ಕಂತೆ ಕಂತೆ,
ಪ್ರಪಂಚವೆಂಬುದು ಸಮಯ ಸಾಧಕರ ಸಂತೆ!
ಹೊಟ್ಟೆಗಿಲ್ಲದವನ ಚಿತ್ರಕ್ಕೆ ಪ್ರಥಮ ಬಹುಮಾನ
ಚಿತ್ರ ಬರೆದವನಿಗೆ ಪ್ರಶಸ್ತಿ, ಸನ್ಮಾನ
ಹಸಿವಿನಿಂದ ನರಳಿದವನ ಬಾಯಿಗಿಷ್ಟು ಮಣ್ಣು,
ಅವನ ನೋವು ಕಾಣಲು ಯಾರಿಗು ಇಲ್ಲ ಕಣ್ಣು!
ಮನುಷ್ಯನ ಕಾಲಡಿ ನೆಲ, ತಲೆ ಮೇಲೆ ಬಾನು
ಕವಿತೆ ಕವಿಗಾಯಿತು, ಬಡವನ ಹೊಟ್ಟೆಗೇನು?
----ಎಂದೆಲ್ಲ ಬರೆದ ನಾನು,
ಕೊನೆಗೆ ಮಾಡಿದ್ದೇನು?
Feb 17, 2008
Subscribe to:
Post Comments (Atom)
ಪ್ಯಾಪಿಯ ಪತಂಗ | Pyapiya Patanga
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
-
ಸುನೀಲನಿಗೆ ಎರಡನೇ ಇಯತ್ತೆಯಿಂದಲೇ ವರ್ಷಕ್ಕೊಬ್ಬ ಹುಡುಗಿಯ ಮೇಲೆ ದೈವಿಕ ಪ್ರೇಮ ಹುಟ್ಟುತ್ತಲೇ ಇತ್ತು. ತರಗತಿಯಲ್ಲಿ ಇದ್ದುದರಲ್ಲಿ ಚೆಂದದ ಹುಡುಗಿಯರಲ್ಲಿ ವಿಪರೀತ ಪ್ರ...
-
It had been 3 days since Siddharth (Sid) joined his new job in an IT firm. He had joined on a Wednseday. The manager had then told, "We...
-
ತಾಳ್ಮೆ, ಶಾಂತಿ, ಪರಿಶ್ರಮ ಇತ್ಯಾದಿ... ************************** ತಾಳ್ಮೆ ತೀವ್ರ ನಿಗಾ ಘಟಕದಲ್ಲಿ ಕೇಳುವವರಿಲ್ಲದೆ ಬಡಕಲಾಗಿದ್ದ. ಯಾರೂ ಮಾತಾಡಿಸಲು ಬಂದಿರಲಿಲ...
No comments:
Post a Comment