Feb 17, 2008

ಕವಿತೆ

ಬಡತನದ ಮೇಲೆ ಭಾಷಣ ಬಿಗಿಯುತ್ತಾರಂತೆ,
ವಿದೇಶಿ ಮದ್ಯ ಹೀರುತ್ತಾ ಅಭಿಪ್ರಾಯ ವ್ಯಕ್ತ ಪಡಿಸುತ್ತಾರಂತೆ
ವರದಿಗಾರರು ಸಂಪಾದಿಸುತ್ತಾರೆ ಕಂತೆ ಕಂತೆ,
ಪ್ರಪಂಚವೆಂಬುದು ಸಮಯ ಸಾಧಕರ ಸಂತೆ!

ಹೊಟ್ಟೆಗಿಲ್ಲದವನ ಚಿತ್ರಕ್ಕೆ ಪ್ರಥಮ ಬಹುಮಾನ
ಚಿತ್ರ ಬರೆದವನಿಗೆ ಪ್ರಶಸ್ತಿ, ಸನ್ಮಾನ
ಹಸಿವಿನಿಂದ ನರಳಿದವನ ಬಾಯಿಗಿಷ್ಟು ಮಣ್ಣು,
ಅವನ ನೋವು ಕಾಣಲು ಯಾರಿಗು ಇಲ್ಲ ಕಣ್ಣು!

ಮನುಷ್ಯನ ಕಾಲಡಿ ನೆಲ, ತಲೆ ಮೇಲೆ ಬಾನು
ಕವಿತೆ ಕವಿಗಾಯಿತು, ಬಡವನ ಹೊಟ್ಟೆಗೇನು?
----ಎಂದೆಲ್ಲ ಬರೆದ ನಾನು,
ಕೊನೆಗೆ ಮಾಡಿದ್ದೇನು?



No comments:

Post a Comment

ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...