Showing posts with label Movie. Show all posts
Showing posts with label Movie. Show all posts

Sep 23, 2012

Barfi!


Barfi is a good movie. It is a refreshing concept, and is worth a watch. It will stay in history as a great attempt. But what surprises me is this - with a good concept in hand, and with such talented lead and supporting actors, why did the movie feel content with just being good! Let me try listing what I didn't like about the movie:
  • There is nothing Chaplinesque about Barfi's character except for his histrionics. It is not a 'smiling through pain' character, though his first love "Shruthi" tells us so.
     
  • There is not enough substance in the first half.
     
  • The multiple flashbacks start intervening with the story-telling. I didn't understand why the flashbacks were required.
     
  • The second half seems dragged towards the end.
     
Film after film, Ranbir has been proving himself. I liked his performance. I think that alone can make Barfi a hit movie.

Dec 11, 2011

ವಿಷ್ಣುವರ್ಧನ

Vishnuvardhana

ವಿಷ್ಣುವರ್ಧನ ಎಂಬ ಹೆಸರಿನ ಬಗ್ಗೆ ಹಿಂದೆ ವಿವಾದ ನಡೆದಿತ್ತು. ಈ ಹೆಸರು ದ್ವಾರಕೀಶರ ದುಡ್ಡು ಮಾಡುವ ತಂತ್ರ ಎಂಬುದು ಸ್ಪಷ್ಟ. ಆದರೆ ನಿರ್ದೇಶಕ ಪಿ. ಕುಮಾರ್ ಆ ಹೆಸರಿಗೆ, ಅದು ಉಂಟು ಮಾಡಿರಬಹುದಾದ ನಿರೀಕ್ಷೆಗೆ ನ್ಯಾಯ ಸಲ್ಲಿಸಿದ್ದಾರೆ. ಇದು ಒಂದು ಪಕ್ಕಾ ಮಸಾಲೆ ಚಿತ್ರ. ಬಹಳ ಸಮಯದ ನಂತರ ಕನ್ನಡದಲ್ಲಿ ಬಂದಿರುವ ಒಳ್ಳೆಯ ಮನರಂಜನೀಯ ಚಿತ್ರ.
ಚಿತ್ರಕಥೆ ಬಿಗಿಯಾಗಿದೆ. ನಿರ್ದೇಶಕರು ನಿರೂಪಣೆಯನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕಥೆ ಬಹಳ ಬೇಗ take-off ಆಗುತ್ತದೆ, ಮತ್ತು ಎಲ್ಲೂ ಸಮಯ ವ್ಯರ್ಥವಾಗಿ ಕಳೆದಿಲ್ಲ. ಹಾಸ್ಯವೂ ಕಥೆಯ ಅಂಶವೇ ಆಗಿರುವುದರಿಂದ ಅಲ್ಲೂ ಸಮಯ ವ್ಯರ್ಥವಾಗಿಲ್ಲ. ಸುದೀಪ್ ನಟನೆ lovely and lively ಆಗಿದೆ. ಹರಿಕೃಷ್ಣ ಸಂಗೀತ ಇನ್ನೂ ಚೆನ್ನಾಗಿರಬಹುದಾಗಿತ್ತು. ಪೋಷಕ ನಟರೆಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜನರನ್ನು theatre ಗಳತ್ತ ಬರುವಂತೆ ಮಾಡುವ ಶಕ್ತಿಯಿರುವ ಒಂದು ಉತ್ತಮ ಚಿತ್ರ ವಿಷ್ಣುವರ್ಧನ.
 

Nov 13, 2011

Rockstar


Rockstar 

You will love the first half. But you will equally hate the second half. Ranbir Kapoor proves he is a star. Rahman need not prove himself anymore. But Imtiaz Ali fails. He sets a vast canvas for the film, and manages to hold things together in the first half. But the second half is far from convincing. I couldn't connect to JJ's pain when he said something about the "lost angels"; "Main un parindo ko dhundh raha hoon...kisi ne dekha hain unhe?" The song "Sadda Haq" comes from nowhere, and the base for this song is not set in the movie. It doesn't take the story anywhere; just adding a song on personal freedom cannot change the theme of the movie.


Imtiaz Ali was brilliant in "Jab We Met". He had managed to get fine performances. The movie had catchy dialogues. The theme was fresh. It didn't give in to stereotypes.


"Rockstar" is heavy drama. Imtiaz makes you feel very helpless in the second half. JJ's behavior has no logic. And there is no other lead character that balances JJ's madness. The movie is not about personal freedom; it is about being illogical and irresponsible!

Oct 9, 2011

ಅಯ್ಯೋ ಪರಮಾತ್ಮ, ಭಟ್ರು ಕೈ ಕೊಟ್ರು!




  • ಸಿನಿಮಾ ಪ್ರಾರಂಭವಾದ ಹತ್ತು ನಿಮಿಷಕ್ಕೆ ಪರಮಾತ್ಮ ಎಂಬ ಹೆಸರಿರುವ ನಾಯಕ ಹಿಮಾಲಯ ಹತ್ತಿ ಮುಗಿಸಿರುತ್ತಾನೆ, ಕುಂಗ್-ಫೂ ಕಲಿತು ಬಂದಿರುತ್ತಾನೆ, ಮುಂಬೈನಲ್ಲಿ ಶೇರು ಮಾರುಕಟ್ಟೆಯ ತಂತ್ರಗಳನ್ನು ಕಲಿತು ಲಾಭ ಹೊಂದಿರುತ್ತಾನೆ, ಇಲ್ಲೊಂದು ವಿಂಡ್-ಮಿಲ್ ಫ್ಯಾಕ್ಟರಿಯ ಮಾಲಿಕನಾಗಿರುತ್ತಾನೆ. ಹಾಗಿದ್ದಲ್ಲಿ ಇನ್ನು ಏನೇನು ಮಾಡಬಹುದು ಇವನು ಎನ್ನುವುದು ಸಿನಿಮಾದ ಕಥೆ ಎಂದು ನೀವು ಅಂದುಕೊಂಡರೆ ತಪ್ಪು, ಪರಮಾತ್ಮ ಏನೂ ಮಾಡದೇ ಇರುವಾಗ ಹೇಗಿರುತ್ತಾನೆ ಎನ್ನುವುದು ಈ ಸಿನಿಮಾದ ಕಥೆ ಇದ್ದಂತಿದೆ! ಅಥವಾ ಏನೂ ಮಾಡದೇ ಇದ್ದರೆ ಪರಮಾತ್ಮನಾಗುತ್ತೀರಿ ಎನ್ನುವುದು ಈ ಸಿನಿಮಾದ ಸಂದೇಶವೇ?  
  •  ಪರಮಾತ್ಮ ಎನ್ನುವುದು ನಾಯಕನ ಹೆಸರು ಎಂಬುದು ಬಿಟ್ಟರೆ ಅವನಲ್ಲಿ ಪರಮತ್ಮನಾಗುವ ಯಾವ ಲಕ್ಷಣಗಳೂ ಇಲ್ಲ. ಒಮ್ಮೆ  ಜೀವನದ ಅರ್ಥ ತಿಳಿದುಕೊಳ್ಳಲು ಟಿಬೆಟಿಗೆ ಹೋಗಿದ್ದು ಬಿಟ್ಟರೆ (ಸಿನಿಮ ಪ್ರಾರಂಭವಾದ ಮೊದಲ ಹತ್ತು ನಿಮಿಷಗಳಲ್ಲಿ ಇದೂ ಆಗಿ ಹೋಗಿರುತ್ತದೆ), ಅವನಲ್ಲಿ ಅಧ್ಯಾತ್ಮಿಕತೆಯ ಯಾವ ಅಂಶವೂ ಕಂಡು ಬರುವುದಿಲ್ಲ. ಸಮಾಜದ ಯಾವ ಆಗು ಹೋಗುಗಳೂ ಇವನ "scheme of things " ನಲ್ಲಿ ಇಲ್ಲ. "ದುಡ್ಡು ಬರ್ತಾನೆ ಇತ್ತು, ಬರ್ತಾ ನೆಮ್ಮದಿ ಹಾಳಾಯ್ತು" ಎಂದು ಒಮ್ಮೆ ಹೇಳುವ ನಾಯಕ, ಒಬ್ಬ ಭಿಕ್ಷುಕನಿಗಾಗಲಿ, ಕೊನೆಯ ಪಕ್ಷ ಒಬ್ಬ ಸ್ನೇಹಿತನಿಗಾಗಲಿ ಯಾವುದೇ ರೀತಿಯ ಸಹಾಯ ಮಾಡುವ ಒಂದು ಸನ್ನಿವೇಶವೂ ಸಿನಿಮಾದಲ್ಲಿಲ್ಲ. ಇದೆಲ್ಲ ಇರಲೇಬೇಕು ಎಂದು ಅಲ್ಲ, ಆದರೆ ಇಷ್ಟು ಮಾಡದೇ ಒಬ್ಬ ವ್ಯಕ್ತಿ ಪರಮಾತ್ಮನಾಗಲು ಸಾಧ್ಯವಾಗುವುದಾದರೆ ನಮ್ಮ ಸಮಾಜದ ತುಂಬೆಲ್ಲ ಬರಿ ಪರಮಾತ್ಮರೆ ತುಂಬಿದ್ದಾರೆ ಎನ್ನಬಹುದು. ಅನಿಸಿದ್ದನ್ನು ಮಾಡಿದವರೆಲ್ಲ ಪರಮಾತ್ಮರಲ್ಲ!
  • ನಾಯಕಿಯ ಪಾತ್ರಕ್ಕೆ ಹುಚ್ಚು ಇದೆಯೇ ಎಂದು ಒಂದಕ್ಕಿಂತ ಹೆಚ್ಚು ಬಾರಿ ಅನಿಸುತ್ತದೆ. ನಗುವುದು, ಕಿರುಚುವುದು ಬಿಟ್ಟರೆ ಬೇರೆ ಏನೂ ಮಾಡಿದಂತಿಲ್ಲ ನಾಯಕಿ. ನಾಯಕನಿಗೆ ಅವಳಲ್ಲಿ ಅಂಥದ್ದೇನು ಕಂಡಿತು ಎಂಬುದಕ್ಕೆ ಉತ್ತರ ಇಲ್ಲ. ನಾಯಕ ಅದರ ಬಗ್ಗೆ ಮಾತಾಡುವುದೇ ಇಲ್ಲ. ಪ್ರೇಮಕ್ಕೆ ಕಾರಣ ಇರಲೇಬೇಕು ಎಂದೇನು ಇಲ್ಲ, ಸರಿ, ಆದರೆ ಯಾವ ಘಳಿಗೆಯಲ್ಲಿ ಪ್ರೇಮವಾಯಿತು ಎಂದಾದರು ಗೊತ್ತಾಗಬೇಕಲ್ಲ! ಅದರ ಬಗ್ಗೆ ಮಾತೇ ಇಲ್ಲ, ನಾಯಕ ಕಾರು ತೆಗೆದುಕೊಂಡು ನಾಯಕಿಯ ಊರಿಗೆ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಾನೆ. ಅರ್ಧ ಸಿನಿಮ ಮುಗಿಯುವ ವೇಳೆಗೆ ಒಮ್ಮೆ, "ಅವಳ ಕೂದಲಲ್ಲಿ, ಮೂಗುತಿಯಲ್ಲಿ ಒಂದು ಹಾಡು ಕೇಳುತ್ತದೆ. ಅದು ನನಗಿಷ್ಟ" ಎಂದು ನಾಯಕ ಹೇಳುವಾಗ ಪ್ರೇಕ್ಷಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ನಾಯಕನಿಗೆ ಆ ಮಾತಿನಲ್ಲಿ ನಂಬಿಕೆ ಇದ್ದಂತಿಲ್ಲ. 
  •  ನಾಯಕನಿಗೆ ತನ್ನ ಸ್ನೇಹಿತರ ನೋವು ತಟ್ಟುವುದಿಲ್ಲ. ಪಸೀನ ಎಂದು ಅವನಿಂದ ಕರೆಸಿಕೊಳ್ಳುವ ಎರಡನೇ ನಾಯಕಿಯ ಪಾತ್ರ, ಪರಮಾತ್ಮನ ಸ್ನೇಹಿತೆಗೆ ಪರಮಾತ್ಮನಲ್ಲಿ ಪ್ರೇಮ ಇರುತ್ತದೆ. ಆದರೆ ನಾಯಕ ಅವಳಿಗೆ, "ನೀನು ಮಗು, ಮಕ್ಕಳನ್ನ ಮದುವೆ ಆಗಿ ಒದ್ದಾಡೋಕೆ ಆಗುತ್ತಾ?", ಎನ್ನುತ್ತಾನೆ. ಇಲ್ಲಿ ಒಂದಿಷ್ಟೂ ಧರ್ಮ ಸಂಕಟ ಅನುಭವಿಸದ ನಾಯಕ "ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ", ಎಂದು ತನ್ನ ಸಂಕಟ ತೋಡಿಕೊಂಡು ಕುಣಿದಾಡುವುದಕ್ಕೆ ಯಾವ ಅರ್ಥವೂ ಇಲ್ಲ.
  • ಇಡೀ ಸಿನಿಮ ನಾಯಕ ಎರಡನೆ ನಾಯಕಿಗೆ ಹೇಳುವ ಕಥೆಯ ರೂಪದಲ್ಲಿದೆ. ಕೊನೆಗೆ ಎರಡನೆ ನಾಯಕಿ ನಾಯಕನಿಗೆ ಮುತ್ತು ಕೊಡುತ್ತಾಳೆ. ನಾಯಕನ ಪುಟ್ಟ ಮಗುವಿಗೂ ಒಂದು ಮುತ್ತು ಕೊಟ್ಟು, "ನಿನ್ನ ಅಪ್ಪ ನಿನಗಿಂತ ಪಾಪು" ಎನ್ನುತ್ತಾಳೆ. "ಮಕ್ಕಳು ದೇವರ ಸಮಾನ", ಎಂದ ಮಾತ್ರಕ್ಕೆ ನಾಯಕನನ್ನು ಏಕ ಕಾಲಕ್ಕೆ ದೇವರು, ಮಗು ಎಂದೆಲ್ಲ ಕರೆದು ಪ್ರೇಕ್ಷಕ ನಂಬಬೇಕು ಎಂದುಕೊಳ್ಳುವುದು ದಡ್ಡತನ! ಮನಸ್ಸು ಸ್ವಚ್ಛ ಇರುವವನು ದೇವರಾಗುತ್ತಾನೆ, ನಿಜ. ಆದರೆ ನಮ್ಮ ನಾಯಕ ಬೇರೆಯವರ ಭಾವನೆಗಳಿಗೆ ಒಂದಿಷ್ಟು ಸ್ಪಂದಿಸದ ಕಲ್ಲು ಜೀವ. ಕೊನೆಗೆ ಇಷ್ಟ ಪಟ್ಟು ಕಟ್ಟಿಕೊಂಡ, ಸುಮ್ಮ ಸುಮ್ಮನೆ ನಗುವ ನಾಯಕಿ ಸತ್ತಾಗಲೂ ನಾಯಕ ಅಳುವುದಿಲ್ಲ. ಅವಳು ಸಂತೋಷ ಹೆಚ್ಚಾಗಿ ಸತ್ತಳು ಎಂದು ನಂಬಿಕೊಂಡು ಬದುಕುತ್ತಾನೆ. ಇದೆ ಪುನೀತ್, ಆಗ ಮಾಸ್ಟರ್ ಲೋಹಿತ್ ಆಗಿ ನಟಿಸಿದ "ಬೆಟ್ಟದ ಹೂವು" ಚಿತ್ರದ ನಾಯಕ ಮನೆಯವರಿಗಾಗಿ ತನ್ನ ಆಸೆಗಳನ್ನು ಬಲಿ ಕೊಡುತ್ತಾನೆ. ಅವನನ್ನು ಪರಮಾತ್ಮ ಎಂದರೆ ಅಡ್ಡಿಯಿಲ್ಲ. ಆದರೆ ಪರಮಾತ್ಮನಾಗುವ ಯಾವ ಅರ್ಹತೆಯೂ ಇರದ ಈ ನಾಯಕ emotional  quotient ತೀರ ಕಡಿಮೆ ಇರುವ ವ್ಯಕ್ತಿಯಾಗಿ ಕಾಣುತ್ತಾನೆ, ದೇವರಾಗಿಯಲ್ಲ!
  •   ಸಿನಿಮಾದ ಕೊನೆಯಲ್ಲಿ ನಾಯಕನಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡುವ ನಾಯಕಿ ಹೊರಡುತ್ತಾ, "ನಾನು ನಿನ್ನ ಬದುಕಿನಲ್ಲಿ ಮತ್ತೆ ಬರುವ ಅವಕಾಶ ಇದೆಯೇ ಎಂದು ತಿಳಿದುಕೊಳ್ಳಲು ಬಂದೆ", ಎನ್ನುತ್ತಾಳೆ. ಹಾಗಿದ್ದಲ್ಲಿ ಅವಳನ್ನು ಮದುವೆಯಾಗಲು ಹೊರಟವನು ಇನ್ನೊಬ್ಬ ಪರಮಾತ್ಮನಿರಬಹುದು!
ಕೊನೆಯ ಮಾತು: ನಾನು ಹೋದ ಥಿಯೇಟರಿನಲ್ಲಿ ಯೋಗರಾಜ್ ಭಟ್ಟರ ಮೇಲೆ, ಪುನೀತ್ ರಾಜ್ ಕುಮಾರ್ ಮೇಲೆ ನಂಬಿಕೆ ಇಟ್ಟು ಬಂದ ಜನರಿಂದಾಗಿ ಹೌಸ್-ಫುಲ್ ಆಗಿತ್ತು. ಥಿಯೇಟರ್ ಬಿಡುವಾಗ ಎಲ್ಲರು ಮಂಕಾಗಿದ್ದರು. ರಂಗಾಯಣ ರಘು ಇರುವ ಕೆಲವು ಸೀನ್ ಗಳನ್ನು ಬಿಟ್ಟರೆ ಜನರು ಮೌನವಾಗಿದ್ದರು. ನಾನು "ಪಂಚರಂಗಿ" ನೋಡಿದಾಗ ಪ್ರೇಕ್ಷಕ ಹೀಗಿರಲಿಲ್ಲ.  

Apr 26, 2011

ಸೂಪರ್

Super
ತುಂಬ ತಡವಾಗಿ "ಸೂಪರ್" ಬಗ್ಗೆ ಬರೆಯುತ್ತಿದ್ದೇನೆ. ಇಷ್ಟರಲ್ಲಿ ಎಷ್ಟೋ ಜನ ಎಷ್ಟೋ ಬರೆದಿದ್ದಾರೆ. ಹಾಗಾಗಿ ಹೆಚ್ಚು ವಿವರಗಳಿಗೆ ಹೋಗದೆ ಮೇಲ್ನೋಟಕ್ಕೆ ಕಾಣಿಸದ ಕೆಲವು ವಿಷಯಗಳ ಬಗ್ಗೆ ಬರೆಯುತ್ತೇನೆ. ಈ ಸಿನಿಮ ತುಂಬ "ಗದ್ದಲಮಯ"ವಾಗಿರುವುದರಿಂದ ಇದರ ನಿಜವಾದ ಸಂದೇಶ ನಮಗೆ ಕಾಣಿಸದೆ ಹೋಗುವ ಸಾಧ್ಯತೆ ಇದೆ. ಚಿತ್ರದ "ಪ್ರೋಮೋ" ಗಳು ಕೂಡ ಸಂದೇಶದ ಸುಳಿವು ಕೊಡುವುದಿಲ್ಲ. ಹಾಡುಗಳು ಕೂಡ "ಗದ್ದಲಮಯ" ವಾಗಿರುವುದರಿಂದ ಅಲ್ಲೂ ಕಥೆಯ ಸುಳಿವು ಸಿಗುವುದಿಲ್ಲ.
ನನ್ನ ಪ್ರಕಾರ ಈ ಸಿನಿಮ ಉಪೇಂದ್ರರವರ ಸಾಮಾಜಿಕ ಕಳಕಳಿಯ ಫಲ. ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಅಭಿಮಾನ ಹೊಂದಿರುವ ನಾವು ಭಾರತೀಯರು ಇದೇ ಮರುಳು ದುರಭಿಮಾನದಲ್ಲಿ ಮುಳುಗಿ ಹೋಗಿ ನಿಷ್ಕ್ರಿಯರಾಗಿದ್ದೇವೆ ಎಂಬುದೇ ಈ ಚಿತ್ರದ ಮೊದಲ ಸಂದೇಶ. ಎರಡನೆಯದಾಗಿ ನಮ್ಮ ದೇಶದ ದುಃಸ್ಥಿತಿಗೆ ಒಂದು ಪರಿಹಾರವನ್ನು ಸೂಚಿಸುತ್ತದೆ. ಪರಿಹಾರ ಕೊಂಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ "workable" ಅನ್ನಿಸುತ್ತದೆ. ಪರಿಹಾರ ಇಷ್ಟೇ : "ಇದು ನನ್ನ ದೇಶ. ಇದರ ಉನ್ನತಿಗೆ ಮತ್ತು ಅವನತಿಗೆ ನಾನು ಜವಾಬ್ದಾರ." ಎಂದು ಪ್ರತಿಯೊಬ್ಬ ಭಾರತೀಯನಿಗೂ ಮನವರಿಕೆಯಾಗಬೇಕು. 
ಈ ಸಂದೇಶಗಳನ್ನು ಜನರಿಗೆ ಮುಟ್ಟಿಸಲಿಕ್ಕೆ ಒಂದು ಪ್ರೇಮ ಕಥೆಯನ್ನು ಹೆಣೆದಿದ್ದಾರೆ ಉಪೇಂದ್ರ. ಪಕ್ಕಾ ಮಸಾಲೆಭರಿತ ಕಥೆಯ ಮೂಲಕ ಒಂದು ಉತ್ತಮ ಸಂದೇಶ ಹೇಳ ಹೊರಟ ಕಥೆಗಾರ ಉಪೇಂದ್ರ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಅನ್ನಬಹುದು. 

ಇದು ಈ ಸಿನಿಮಾದ ಕುರಿತು. ಇದಲ್ಲದೆ ಕೆಲವು ವಿಷಯಗಳು ತಲೆಗೆ ಬಂದವು :
೧. ಒಂದು ಕಾಲದಲ್ಲಿ "ನಾನು" ಎಂಬ concept ಅನ್ನು ಸಿನಿಮಾದಲ್ಲಿ ಹೇಳಿದ್ದ ಉಪೇಂದ್ರ ಇಂದು ಒಂದು ಸಾಮಾಜಿಕ ಕಳಕಳಿ ಉಳ್ಳ ಚಿತ್ರವನ್ನು ಮಾಡಿದ್ದಾರೆ. "ನಾನು" ಎಂಬುದರ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೋ ಏನೋ? ಅಥವಾ ರಾಜಕೀಯಕ್ಕೆ ಇಳಿಯಲು ಮಾಡಿಕೊಂಡ "home work " ಇದ್ದರೂ ಇರಬಹುದು!
೨. ಯೋಗರಾಜ ಭಟ್ ಮತ್ತೆ ತಮ್ಮ ದನಿಯನ್ನು ಉಪಯೋಗಿಸಿದ್ದಾರೆ ಇಲ್ಲಿ. ಅವರು ಈ ಸಿನಿಮಾದ narrator . ಒಂದು ಹಾಡನ್ನು ಕೂಡ ಬರೆದಿದ್ದಾರೆ ಅನ್ನಿಸುತ್ತದೆ. ಬಹುಷಃ ಕನ್ನಡದ ನಿರ್ದೇಶಕರು ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಹಕರಿಸಲಿಕ್ಕೆ ಶುರು ಮಾಡಿದ್ದಾರೆ ಅನಿಸುತ್ತದೆ. ಇದು ನಿಜ ಇದ್ದಲ್ಲಿ, ಇದು ಒಂದು ಆರೋಗ್ಯಕರ ಬೆಳವಣಿಗೆ.
೩. ಉಪೇಂದ್ರ ಖಾಲಿಯಾಗಿದ್ದಾರೆ ಅನಿಸುತ್ತದೆ. ಈ ಅನಿಸಿಕೆಗೆ ಬಲವಾದ ಕಾರಣ ಯಾವುದೂ ಇಲ್ಲ. ಆದರೂ ಯಾಕೋ ಹಾಗೆ ಅನ್ನಿಸಿತು. 
   

Nov 3, 2010

ಪಂಚರಂಗಿ





ಇದು ಹಾಸ್ಯ ಚಿತ್ರವಲ್ಲ, "ವ್ಯಂಗ್ಯ" ಚಿತ್ರ ಅನ್ನಬೇಕು. ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋದ ಜೀವಗಳಿಗೆ ವ್ಯಂಗ್ಯದ ಚುಚ್ಚು ಮದ್ದು ಇದು. ಪ್ರತಿ ದೃಶ್ಯದಲ್ಲೂ ತಿವಿದು ಎಬ್ಬಿಸುವಂಥ ಸಂಭಾಷಣೆ ಉಪಯೋಗಿಸಿದ್ದಾರೆ ಯೋಗರಾಜ ಭಟ್.

ಭಾರಿ ತತ್ವ ಅಥವಾ ನೀತಿಗಳ ಬೆಂಬಲವಿಲ್ಲದ ಒಂದು ಶುದ್ಧ ಮನೋರಂಜನೀಯ ಸಿನಿಮ ಇದು. ಜೀವನದ ಬಗ್ಗೆ ತೀವ್ರವಾಗಿ ಯೋಚಿಸುತ್ತಲೇ "ಲೈಫು ಇಷ್ಟೇನೆ" ಎನ್ನುವ ಉಡಾಫೆಯನ್ನೂ ನಾಯಕನ ಮೂಲಕ ತೋರಿಸಲಾಗಿದೆ. ಪ್ರತಿ ಬಾರಿ "ಲೈಫು ಇಷ್ಟೇನೆ" ಎನ್ನುವಾಗಲೂ ವೀಕ್ಷಕ "ಇದರಾಚೆಗೂ ಏನೋ ಇದೆ" ಎಂದು ಯೋಚಿಸುವಂತೆ ಮಾಡುವುದೇ ನಿರ್ದೇಶಕನ ಉದ್ದೇಶ ಅನ್ನಿಸುತ್ತದೆ.

ಹಾಡುಗಳ ಮೂಲಕ ನಿರ್ದೇಶಕ ವೀಕ್ಷಕನೊಂದಿಗೆ ನೇರ ಸಂಭಾಷಣೆಗೆ ಇಳಿದಂತೆ ಕಾಣುತ್ತಿದೆ. "ಪಂಚರಂಗಿ ಹಾಡುಗಳು" ಎಂಬ ಹಾಡಿನಲ್ಲಿ ನಾಯಕನಿಗೆ ಹಿನ್ನೆಲೆ ಧ್ವನಿ ನೀಡುವ ಯೋಗರಾಜ್ ಭಟ್ ನಾಯಕನ ಮೂಲಕ ತೋರಿಸಲು ಹೊರಟಿದ್ದು ತಮ್ಮ ಜೀವನ ದೃಷ್ಟಿಯನ್ನು ಎಂದು ನನ್ನ ಭಾವನೆ. ಈ ಹಾಡಿನಲ್ಲಿ ಧ್ವನಿಯಲ್ಲಿರುವ ವ್ಯಂಗ್ಯದಿಂದಾಗಿ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.

ಪಾತ್ರ ಪೋಷಣೆಗೆ  ಸಾಕಷ್ಟು ಗಮನ ಹರಿಸಲಾಗಿದೆ. ಕಥೆಯಲ್ಲಿ ಸಂಕೀರ್ಣ ಅಂಶಗಳೇನು ಇಲ್ಲದೆಯೂ ವೀಕ್ಷಕನನ್ನು ತೊಡಗಿಸಿಕೊಳ್ಳುವ ಸತ್ವ ಉಳ್ಳ ಸಂಭಾಷಣೆ ಇದೆ. ನಟರೆಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಂಡಿತವಾಗಿಯೂ ಇದು ಒಂದು ಉತ್ತಮ ಚಿತ್ರ; ವೀಕ್ಷಕನನ್ನು ಯೋಚಿಸಲು ಹಚ್ಚಿಸುವಲ್ಲಿ ಯಶಸ್ವಿಯಾಗುವ ಚಿತ್ರ.

Nov 22, 2009

Sathyan Anthikkad

The message of any Sathyan Anthikkad movie is simple – “Love your life”. And, all of his movies convey this message through down to earth characters. His movies don’t have larger than life heroes. They all lead normal lives. They worry about small things in life. They feel happy for small things in life. They dream about big and small things in life. They cry, they laugh, and they fight – all for small things in life.


Nobody else would have explored relations the way Sathyan Anthikkad did in his movies. He builds the characters, and the relation between them through mundane things. They don’t need something spectacular to connect with each other. They don’t need a cruel villain to discover the depth of their relationships. He uses normal incidents like an old lady bringing idiyappam (which she had prepared the previous night, sitting awake whole night) to her friend to establish the relations. He builds on the same incident, and brings in the hygiene conscious daughter-in-law who throws away the idiyappam. This makes the simple old lady look silly in front of the sophisticated members of high-society. She leaves the place, weeping bitterly. If this doesn’t make you cry, probably you have had high doses of Bollywood movies, and maybe nothing makes you cry anymore.



His male protagonists are not all-knowing. They have their own complexes. More often than not they are silly and dumb. And they are practical and worldly. More importantly, they love their lives. The brilliance of Satyan Anthikkad is in establishing the relationship between the characters. In “Veendum chila veettu karyangal”, the male protagonist is a son of a rich father. He is mad about acting. On the other hand, the female protagonist is the only bread-earner of her family. She acts in one of the dramas in which our male protagonist plays the hero. He starts admiring her and eventually falls in love with her. If not for the background of our hero, who has always had his father’s support, it would be unnatural and filmy for a rich guy falling in love with a poor girl. This is where Sathyan’s brilliance shows; he gives us all the details which tell us that the hero has always lived under his father’s protection, and had never faced the real world.



Sathyan’s formula for a successful movie is as simple as his films are. First, make sure that there is something catchy about the movie promos that bring people to the theatres. Second, make sure that the movie has a strong story. If the story is strong enough, more people will come in. This, he said in an interview. In the same interview, he talked a lot about the festivals, food, and other simple things in life. So that is where the characters have got their simplicity from!

One problem I have noticed in Sathyan’s films is that he messes things up in the climax. He tries to make the story more convincing, failing to maintain the balance. One such example is “Yathrakkarude shraddhekku”. Sathyan is a keen observer of people. This shows in the way his characters behave, the way they talk and in the way they interact with other characters.

He makes sure that you never miss the irony or the humour in a situation. The dialogues are catchy and to the point. However, when it comes to wrapping things up by saying, “So the moral of the story is…” Satyan seems to be in confusion. He fumbles a bit. However, such is the charm of a Sathyan movie that you forget this; only the good things about the movie stay in your memory.

Watch a Sathyan movie. Say cheers to small things in life.

Feb 15, 2009

Salaam Bombay

I watched "Salaam Bombay" last night, courtesy Sunil's laptop and his movie craze. He told me, "This is SlumDog Millionaire's baap ka baap.", before playing the movie. I would say "SlumDog Millionaire" can't even be the grandson. "Salaam Bombay" is class apart. Salaam Mira Nair!

It is the story of Krishna alias chai pau. He enters Bombay looking to earn Rs 500. He ends up killing Baba, the mastermind behind the drug trade and prostitution in that part of Bombay. The wikipedia article, as always, has an accurate account of the plot and other details.



The script is brilliant. The picturisation is perfect. The locations are real. The actors are great. The undercurrent of the movie is optimism. The intention of the movie is not to attract the attention by showing filthy things, but to present the problems. The intention is not to cash in on sympathy, but to educate the viewer about the problem and thereby provoke questions in his mind. The director's restraint in handling the subject is clearly visible. Full marks to Mira Nair.

The theme music by L.Subramaniam is brilliant. It represents the athma of the movie very effectively.

Some good links of videos on YouTube:
Theme: http://www.youtube.com/watch?v=XZhpnLPL990&NR=1
3 scenes: http://www.youtube.com/watch?v=ytuN_-unCG4&NR=1
Escape from the prison: http://www.youtube.com/watch?v=do9Dm3sHiSY&NR=1
Wedding Reception: http://www.youtube.com/watch?v=kqXFCPT2mh4&NR=1
Music Score: http://www.youtube.com/watch?v=ya1CsLVfmSo&feature=related

Feb 10, 2009

Nothing

Some movies I watched recently:

The water horse, legend of the deep : Directed by Jay Russell, it is just another fantasy film. Special effects are good, locations are great, but the plot is not well developed.
The main character is a boy who comes across a mysterious egg and takes it home. The story develops with an unknown creature hatching from the egg.
The creature, the water horse, that hatches out of the egg is named "Crusoe" and the creature becomes the boy's best friend. We are made to believe that the water horse is a huge but lovable creature. The bonding between the boy and the water horse is the theme of the story. The theme is cute because it is always cute when a huge animal forms a bond with a human being. Is this a cliche? Maybe.

The boy's father, a sailor, is missing after the ship he was in, sunk during the war. The boy doesn't believe that his father is dead. The boy's memories about his father are shown as flashbacks in the narrative.
The boy's mother looks confused. Confused about what? Her role, probably. There are hints of a love story developing between this lady and the handyman of the house. This parallel plot is not developed and we are made to feel that it is not important. Was the script writer (or the director) not confident about this story line? Probably, yes.

I was not able to connect to the characters. I didn't like watching it. At no point I found me saying "Brilliant".

Accident (Kannada, 1985): This was directed by Shankar Nag. This is the story of a spoiled son of a rich father, a politician. One night, this spoiled son drives his car on people sleeping on the footpath and kills 12 of them during the act. After the incident, he drives back home, washes the car, changes the tyres and tries to be normal. This accident and the following incidents form the plot of the movie.
However, the evidences lead the police to the son. The father comes to know about the incident. He is shocked, but doesn't want to lose the elections and decides to play the political game. The cop who was working on this case is asked to go on a long leave. Frustrated and helpless, the cop calls up a journalist and discloses the details of the accident and the culprit.
Shankar Nag plays the role of the journalist. Rest of the movie is about the journalist's fight against the culprits.



I liked the movie. The characters look real and convincing. There is a poetic justice in the climax and you are made to believe that truth triumphs. But that is the director's attempt to end the movie with a positive note. Thumbs up to Shankar Nag.

The alphabet killer : The article in wikipedia explains the plot better than I can do. I liked the movie. The main character is schizophrenic. The hallucinations of the character are effectively used in the narrative. At one point, her hallucinations become yours too.
The twists in the plot come at right points. The narrative is not desperate and doesn't try to impress the viewer. Plus, there is no logical conclusion. It just presents a story and allows the user to decide on the meaning. At least, I like to believe that way.

Dostana : Not worth watching. In fact, it is a crime watching it. Most of the times, Bollywood sells nonsense. But this one is extreme. I hated it for cliches it uses. I hated it for the treatment of characters. I hated it for the laziness of the script writer. I hated it, I don't remember for what else.

Vaaranam Ayiram : Again, the wikipedia article explains better. I liked the movie. The script is not tight and the director has managed to use this as a positive point. The movie doesn't try to prove any point. It shows the transformation of a boy to a man, in a refreshing way.
The female characters are dressed up like normal human beings and not like models ready to walk on the ramp. Phew! It is such a relief to see normal human beings on screen. That is the first thing I liked. I liked Surya for the way he portrayed the two characters. I liked the way the kidnap incident in the movie is handled. I somehow felt that the director was just trying to show the transformation in the character. I felt that the fight in the kidnap incident was not to impress the viewer.



The movie tries to tell many things about life, without giving in to popular beliefs. The underlying emotion of the movie is the love towards life. When I realised this, I liked the movie more.

ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...