Jan 9, 2015

Testing blogger android application

This is good.
application ಬಹಳ ಚೆನ್ನಾಗಿದೆ, simple to use.

Dec 1, 2014

Facebook Ramblings - Dec 2014

Dec 28, 2014:

The year looked normal and uninteresting; but when Facebook told me how great it was, WOW!
feeling blah.

 Dec 21, 2014:


ನಿನ್ನೆಯಿಂದ ಪೀಕೆ ಸಿನಿಮಾದ ಬಗ್ಗೆ ಫೇಸ್ಬುಕ್ಕಿನಲ್ಲಿ ಕೇಳಿ ಬರುತ್ತಿರುವ ವಿವಿಧ ತಪ್ಪು ಅಭಿಪ್ರಾಯಗಳು :
೧. ಇದು ಹಿಂದೂ ಧರ್ಮ ವಿರೋಧಿ ಸಿನಿಮಾ: ಪೀಕೆ ಮನರಂಜನೆಗೋಸ್ಕರ ಮಾಡಿರುವ ಸಿನಿಮಾ. ಮನರಂಜನೆ ನೀಡುತ್ತಲೇ ಮನುಷ್ಯ ಕಟ್ಟಿರುವ ದೇವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಆ ಪ್ರಶ್ನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತವೆ. ಸಿನಿಮಾವನ್ನು ವಿಮರ್ಶೆ ಮಾಡುವ ಬದಲು ಅದರ ನಾಯಕನಟನ ಧರ್ಮವನ್ನು ವಿಮರ್ಶೆ ಮಾಡಹೊರಟರೆ ಇಂಥ ಅಭಿಪ್ರಾಯ ಬರುತ್ತದೆ.
೨. ಪೀಕೆಯಲ್ಲಿ ಹೊಸತೇನೂ ಇಲ್ಲ. ಇದೆಲ್ಲ ನನಗೆ ಮೊದಲೇ ಗೊತ್ತಿತ್ತು: ಒಂದಿಷ್ಟು ಪುಸ್ತಕಗಳನ್ನು ಗಂಭೀರವಾಗಿ ಓದಿದವರಿಗೆ ಸಾಮಾನ್ಯರಿಗೆ ...ತಿಳಿದಿರದ ಎಷ್ಟೋ ವಿಷಯಗಳು ತಿಳಿದಿರುತ್ತದೆ. ಆದರೆ ಆ ಬುದ್ಧಿವಂತಿಕೆಯ ಅಹಂ ಇಟ್ಟುಕೊಂಡು ನೋಡಿದರೆ ಯಾವ ವಿಷಯವೂ ಹೊಸದಾಗಿ ಕಾಣುವುದಿಲ್ಲ. ಎಲ್ಲ ಸಿನಿಮಾಗಳೂ ನಮ್ಮ ಬುದ್ಧಿವಂತಿಕೆಗೆ ಸವಾಲಾಗಿಯೇ ಇರಬೇಕು ಎಂದೇನಿಲ್ಲ. ಇದುವರೆಗೆ ಕೆಲವು ವಿಚಾರವಾದಿಗಳ ಮಾತುಗಳಲ್ಲಿ, ಪುಸ್ತಕಗಳಲ್ಲಿ,ಹಾಗೂ ಕೆಲವರ ಮನಗಳಲ್ಲಿ ಕುಳಿತಿದ್ದ ವಿಚಾರಗಳು ಬಾಲಿವುಡ್ ನಂಥ ಪ್ರಬಲ ಮಾಧ್ಯಮದ ಮೂಲಕ ಮತ್ತಷ್ಟು ಜನರನ್ನು ತಲುಪುವುದಾದರೆ ತಪ್ಪೇನು? 'ಪ್ರೇಮ ಅಮರ' ಎನ್ನುತ್ತ ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಪ್ರೇಮವನ್ನು ಏನೋ ಹೊಸ ವಿಷಯವೆಂಬಂತೆ ಮತ್ತೆ ಮತ್ತೆ ತೋರಿಸುವ ಸಿನಿಮಾಗಳ ಮಧ್ಯೆ ಇಂಥದೊಂದು ಹೊಸ ಪ್ರಯತ್ನ ನಡೆದಾಗ ಪ್ರೋತ್ಸಾಹಿಸಬೇಕೆ ಹೊರತು 'ನನಗಿದೆಲ್ಲ ಇಪ್ಪತ್ತು ವರ್ಷಗಳ ಹಿಂದೆಯೇ ಗೊತ್ತಿತ್ತು' ಎಂಬ ಗರ್ವ ತಪ್ಪು.
೩. ಅಮೀರ್ ಖಾನ್ ಹಿಂದುತ್ವ ವಿರೋಧಿ, ಅವನ ಸಿನಿಮಾ ನೋಡುವ ಹಿಂದೂಗಳು ನಿರಭಿಮಾನಿಗಳು: ಸಿನಿಮಾವನ್ನು ಸಿನಿಮಾ ಆಗಿ ನೋಡದೆ hidden agenda ಗಳನ್ನು ಹುಡುಕುವವರಿಗೆ ಹೀಗೆ ಅನ್ನಿಸುತ್ತದೆ. ಪೀಕೆ ನೋಡಿದ ಹಿಂದೂಗಳು ಮರುಕ್ಷಣವೇ ಹಿಂದೂ ಧರ್ಮ ಸರಿಯಿಲ್ಲ, ನಾವೆಲ್ಲ ಧರ್ಮ ಬದಲಿಸೋಣ ಎನ್ನುತ್ತಾರೆಯೇ?

Dec 20, 2014:

PK : An awesome first half makes you laugh about God, religion, and social conditioning. That makes it a treat to watch. The movie gives in to usual Bollywood formula in the second half, but that can be forgiven.
Rajkumar Hirani has used all his usual tricks, but has delivered a movie that is entertaining and thought provoking.
Watch it for the terrific first half. That alone makes it a great movie.

Dec 1, 2014:

ಮಾತು ಆಡಿದರೆ ಹೋಯಿತು, ಟಚ್ ಸ್ಕ್ರೀನ್ ಒಡೆದರೆ ಹೋಯಿತು. :-D

Nov 1, 2014

FaceBook Ramblings - Nov 2014

Nov 20, 2014:

ಎಫ್.ಎಮ್. ನಲ್ಲಿ ಹಾಡು ಕೇಳುತ್ತಾ ಗಾಡಿ ಓಡಿಸುತ್ತಿದ್ದ ಅವನ ಟೈರ್ ಒಮ್ಮೆ ಜೋರಾಗಿ 'ಢಮ್' ಎಂದು ಸದ್ದು ಹೊರಡಿಸಿ ಗಾಳಿ ಕಳೆದುಕೊಂಡಿತು. ಇನ್ನೇನು ಹಿಡಿತ ತಪ್ಪಿ ಬೀಳಲಿದ್ದವನು ಸಂಭಾಳಿಸಿಕೊಂಡು ಗಾಡಿಯನ್ನು ರಸ್ತೆಯ ಬದಿಗೆ ತರುವಲ್ಲಿ ಯಶಸ್ವಿಯಾದ. ಗಾಡಿಯನ್ನು ತಳ್ಳಿಕೊಂಡು ಹೊರಟ. ಬಿಸಿಲು ಜೋರಿತ್ತು. ಬೆವರಿಳಿಸಿಕೊಂಡು, ಏದುಸಿರು ಬಿಡುತ್ತಾ ಅಸಹಾಯಕ ಸಿಟ್ಟಿನಲ್ಲಿ ಪ್ರಪಂಚಕ್ಕೆಲ್ಲ ಬಯ್ಯುತ್ತಿದ್ದವನ ಕಣ್ಣಿಗೆ ಆ ಬೋರ್ಡು ಬಿದ್ದಾಗ ಅವನ ಬಾಯಲ್ಲಿ ಬಂದ ಹಾಡು - 'ಅರರರೇ ಪಂಚರ್ ಅಂಗ್ಡಿ!!!'. ಎಫ್.ಎಮ್. ನಲ್ಲಿ ಬರುತ್ತಿದ್ದ ಹಾಡು -'ಅರರರೇ ಪಂಚರಂಗಿ!'

Nov 18, 2014:

ಒಂದು ಮಕ್ಕಳ ಕಥೆ:
ಒಂದು ಊರಿನಲ್ಲಿ ಒಬ್ಬ ಸಜ್ಜನ ವ್ಯಾಪಾರಿಯಿದ್ದ. ಅವನು ದೈವಭಕ್ತ, ನ್ಯಾಯಕ್ಕೆ ಹೆದರುತ್ತಿದ್ದ. ಊರ ಜನರೂ ಕೂಡ ಇವನನ್ನು ಬಹಳ ಮೆಚ್ಚುತ್ತಿದ್ದರು.
ಅದೇ ಊರಿನಲ್ಲಿ ಒಬ್ಬ ದುಷ್ಟ ವ್ಯಾಪಾರಿಯಿದ್ದ. ಅವನು ದೇವರನ್ನು ನಂಬುತ್ತಿರಲಿಲ್ಲ. ಅವನು ಬಹಳ ಅನ್ಯಾಯ ಮಾಡುತ್ತಿದ್ದ.
...
ಕಾಲ ಕಳೆದಂತೆ ಸಜ್ಜನ ವ್ಯಾಪಾರಿಯ ವ್ಯವಹಾರ ಉನ್ನತಿ ಹೊಂದುತ್ತಾ ಹೋಯಿತು. ದುಷ್ಟ ವ್ಯಾಪಾರಿಯ ಮೋಸ, ವಂಚನೆ ಅವನನ್ನೇ ಬಲಿ ತೆಗೆದುಕೊಂಡಿತು.
ನೀತಿ: ನ್ಯಾಯಕ್ಕೇ ಜಯ.... ಹೀಗೆಲ್ಲಾ ಹೇಳ್ತಾ ಹೋದ್ರೆ ಇವತ್ತಿನ ಮಕ್ಕಳು ನಂಬೊಲ್ಲ ಬಿಡಿ. ದೊಡ್ಡವರಂತೂ ಪಕಪಕನೆ ನಗುವುದು ಖಂಡಿತ. ಹಾಗಿದ್ರೆ ನೀತಿ ಏನು? ಯಾವೋನಿಗೊತ್ತು!

Nov 17, 2014:

ಈ 'ಸೆಲ್ಫಿ' ಯುಗದಲ್ಲಿ 'ಸೆಲ್ಫ್ ಲೆಸ್' ಆಗಿರು ಅಂತ ಹೇಳೋದು ಹೇಗೆ?



Oct 1, 2014

FaceBook Ramblings - Oct 2014

Oct 24, 2014:

ಅಪ್ಪ ಪಟಾಕಿ ಕೊಡಿಸ್ತಿರಲಿಲ್ಲ. 'ಎಟುಕದ ದ್ರಾಕ್ಷಿ ಹುಳಿ' ಅನ್ನಿಸಿರಬಹುದು, ಮತ್ತು ಅನಿಸಿದ್ದನ್ನೆಲ್ಲ 'ಚುಟುಕ'ದಲ್ಲಿ ಹೇಳುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗ ಬರೆದದ್ದು, ದೀಪಾವಳಿಯ ಸಮಯದಲ್ಲಿ:
ಹಬ್ಬದಂದು ಪಟಾಕಿ ಏಕೆ?
ಸಂತಸವ ಸದ್ದಿನೊಂದಿಗೆ ಆಚರಿಸಬೇಕೆ!
ವೃಥಾ ಮಾಲಿನ್ಯವ ಸೃಷ್ಟಿಸಲೇಕೆ?...
ಮುಂದೊಮ್ಮೆ ಮರುಗಬೇಕಾದೀತು, ಜೋಕೆ!

Oct 16, 2014:
ಬಂಧೀಖಾನೆ....
ನಾನೊಬ್ಬ ಖೈದಿ,
ಸಿದ್ಧಾಂತಗಳೆಲ್ಲ ಸರಪಳಿಗಳು
ನಾ ಬಂಧಿ ವಿಚಾರಗಳ ಬಂಧೀಖಾನೆಯಲ್ಲಿ....
...
ನನ್ನ ಗೆಳೆಯ ಕೂಡ ಖೈದಿ,
ರೂಪಾಯಿಯ ಸರಪಳಿಯಲ್ಲಿ
ಅವ ಬಂಧಿ ಅವನ ಕಾರು, ಅವನದೇ ಅಪಾರ್ಟ್ಮೆಂಟುಗಳಲ್ಲಿ
ನನ್ನ ಬಾಸ್ ನ ಕಥೆ ಬೇರೆ,
ಅವ ನಿಜಕ್ಕೂ ಸ್ವತಂತ್ರ
ಅದು ತಿಳಿಯದ ಅವನೂ ಕೂಡ ಬಂಧಿ,
ಅವನದೇ ಮೌಢ್ಯದಲ್ಲಿ!
ನೆರೆಮನೆಯವ ಸಿನಿಕ
ಅಲ್ಲದೇ ಮಹಾ ಮೌನಿ
ಅವನೂ ಕೂಡ ಖೈದಿ
ಅವನದೇ ಮೌನದಲ್ಲಿ...
ಅವನ ಪತ್ನಿ ಬಾಯಿಬಡುಕಿ
ಜೊತೆಗೆ ಟೆಲಿವಿಷನ್ ಶೋಕಿ
ವಿಚಾರಗಳೆಲ್ಲ ಚೌಕಾಕಾರ
ಅವಳು ಎಂದೆಂದಿಗೂ ಬಂಧಿ
ನಲವತ್ತೆರಡಿಂಚಿನ ಪೆಟ್ಟಿಗೆಯಲ್ಲಿ!
ನಾವೆಲ್ಲ ಖೈದಿಗಳು
ನಮ್ಮ ನಂಬಿಕೆಗಳಲ್ಲಿ,
ಭಕ್ತಿಯಲ್ಲಿ, ಪ್ರೇಮದಲ್ಲಿ
ಮಮತೆಯಲ್ಲಿ, ಮಾತ್ಸರ್ಯದಲ್ಲಿ...
ನಾವು ಕಟ್ಟಿದ ದೇವರು ಕೂಡ ಖೈದಿ
ಅವನು ಎಂದೆಂದಿಗೂ ಬಂಧಿ,
ನಾವು ಹೊರಿಸಿದ ಶಕ್ತಿಯ ಭಾರದಲ್ಲಿ,
ಕಲ್ಪಿತ ಕಥೆಗಳ ಪರಿಮಿತ ಸತ್ಯಗಳಲ್ಲಿ,
ಬದಲೇ ಆಗದ ಧರ್ಮ ಗ್ರಂಥಗಳ ವ್ಯಾಖ್ಯಾನದಲ್ಲಿ....
ಇಷ್ಟರಲ್ಲೇ ದೇವರು ಕೂಡ
ಬೈಲ್ ಅರ್ಜಿ ಹಾಕಿರಬಹುದು....

Oct 1, 2014:

ಏನಾಶ್ಚರ್ಯ! ಎಷ್ಟೊಂದು ವಿದ್ಯಾವಂತರೆನಿಸಿಕೊಂಡವರಿಗೆ ರಸ್ತೆಯಲ್ಲಿ ಕಸ ಎಸೆಯಬಾರದೆಂದು ಮೊನ್ನೆ ಮೊನ್ನೆ ಅರಿವಾಯಿತಂತೆ. ಶಂಖದಿಂದ ಬಂದ್ರೇನೆ ತೀರ್ಥ ಅಂದರೆ ಇದೇ ಏನು?


Sep 1, 2014

FaceBook Ramblings - Sep 2014

Sep 29, 2014:

Banners welcoming Amma, on Hosur road. What did they mean; welcome to Parappana Agrahara?

Sep 19, 2014:

When life becomes just about the house you own, the car you drive, the restaurants you dine in, and the money you earn... You know you have stopped living.

Sep 17, 2014:

ನೈಸ್ ರೋಡ್ ನ ಬದಿಯಲ್ಲಿ ಬೆಳೆದ ಹುಲ್ಲನ್ನು ಕತ್ತರಿಸಿ 'ಸಮ' ಮಾಡುವವರನ್ನು ಕಂಡಾಗ ಅನಿಸಿದ್ದು - ಮನುಷ್ಯ ಯಾವುದನ್ನೂ ಅದರ ಪಾಡಿಗೆ ಬಿಡಲೊಲ್ಲ. ಎಲ್ಲವನ್ನೂ ಕತ್ತರಿಸಿ ಮಟ್ಟಸ ಮಾಡಬೇಕು, ಎಲ್ಲವೂ ತನ್ನ ಹಿಡಿತದಲ್ಲಿರಬೇಕು. ಎಲ್ಲವೂ ವ್ಯವಸ್ಥೆಯ ಬಂಧನದಲ್ಲಿರಬೇಕು. ಯಾವನಾದರೂ ಸ್ವತಂತ್ರನಾಗಿರಲು ಯತ್ನಿಸುತ್ತಿದ್ದಾನೆಯೇ? ಬಿಡಬೇಡ, ಕಡಿದು ಮಟ್ಟಸ ಮಾಡು!



Jul 1, 2014

FaceBook Ramblings - Jul 2014

Jul 30, 2014:

Preethi-geethi, maduve-giduve, college - geelej, thindi-gindi, jagaLa-gigaLa... 'gi'kaarave yake?

Jul 17, 2014:

ಮನುಷ್ಯ ಮನುಷ್ಯನಿಗೆ ಅರ್ಥವಾಗದ ಕಾರಣಕ್ಕಾಗಿ ದೇವರನ್ನು ಸೃಷ್ಟಿಸಿದನೇ?

Jun 1, 2014

FaceBook Ramblings - Jun 2014

Jun 22, 2014:

ಟಿಪಿಕಲ್ ಕೈಲಾಸ್ : ಸಹಜ ಹಾಸ್ಯದ ಉತ್ತಮ ಚಿತ್ರ. ಸೃಜನ್ ಲೋಕೇಶ್ ನಗಿಸುವುದು ತುಂಬ ಸುಲಭವೇನೋ ಎಂದೆನಿಸುವಂತೆ ನಟಿಸಿದ್ದಾರೆ. ಹಾಸ್ಯಕ್ಕಾಗಿ ಹಾಸ್ಯ ಸೃಷ್ಟಿಸದೆ, ಒಂದು ಸರಳ ಕಥೆ ಹೇಳುತ್ತ, ಆ ಕಥೆಯಲ್ಲಿ ಹಾಸ್ಯವನ್ನು ಬೆರೆಸಿರುವ ನಿರ್ದೇಶಕರ ಶೈಲಿ ಇಷ್ಟವಾಗುತ್ತದೆ.
Watch it for a good laugh.

Jun 19, 2014:

ದೇವರು ಇದ್ದಾನೆಯೇ ಇಲ್ಲವೇ ಎಂದು ಕೇಳಿದರೆ ಇದ್ದಾನೆ ಅಥವ ಇಲ್ಲ ಎಂದು ಖಚಿತವಾಗಿ ಉತ್ತರಿಸುವವರೆ ಹೆಚ್ಚು. ಈ ಪ್ರಶ್ನೆಗೆ 'ಗೊತ್ತಿಲ್ಲ ', ಎಂದು ಮುಗ್ಧವಾಗಿ ಉತ್ತರಿಸುವುದು ಸಾಧ್ಯವಿಲ್ಲವೆ? 'ನಾನು' ಎಂದರೆ ಏನು ಎಂಬುದನ್ನು ಅರಿಯುವುದೇ ಅಸಾಧ್ಯವಾಗಿರುವಾಗ, ದೇವರು ಇಲ್ಲ ಎಂದು ಸಾಧಿಸಿ ತೋರಿಸಲು ಸಾಧ್ಯವೆ? ಅಥವ ದೇವರು ಇದ್ದಾನೆ ಎನ್ನುವುದಾದಲ್ಲಿ ಅವನನ್ನು ಪಡೆಯಲು ಸಾಧ್ಯವೆ!? ಮನುಷ್ಯತ್ವವನ್ನು ಉಳಿಸಿಕೊಳ್ಳಲೇ ಹೆಣಗಬೇಕಾಗಿ ಬಂದಿರುವಾಗ, ದೈವತ್ವದ ಅನ್ವೇಷಣೆ ಅವಶ್ಯವೆ?

Jun 3, 2014:

ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ? ಬದುಕಿನ ಹಿಂದೆ ಹೋದವರು ಪ್ರಶ್ನೆಗಳನ್ನು ಮರೆಯುತ್ತಾರೆ, ಪ್ರಶ್ನೆಗಳ ಹಿಂದೆ ಹೋಗುವವರು ಬದುಕುವುದನ್ನು ಮರೆಯುತ್ತಾರೆ. ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತೇನೆ ಎನ್ನುವವರು ಎರಡಕ್ಕೂ ನ್ಯಾಯ ಒದಗಿಸುವುದಿಲ್ಲ.
ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ?



ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...